ನೆಲ - ಜಲ ಸಂರಕ್ಷಣೆ
ಬತ್ತಿದೆ ಭೂಮಿ ಒಂದು ಹನಿ ನೀರಿಲ್ಲ ಕಾಣದಾಗಿದೆ ಮೃಗಜಲ ಮರಭೂಮಿಯಾಗಿರುವ ಬರಡು ನೆಲದಲ್ಲಿ
ಹಿಡಿಶಾಪ ಹಾಕಿವೇ ಕಾಡುಪ್ರಾಣಿಗಳು ಈ ಮಾನವರು ಹೀಗೆಕೆ ಹೀಗೆಕೆ ಎಂದು ||
ಮಾಯವಾಗಿದೆ ಶುದ್ಧವಾದ ಗಾಳಿ, ಶುದ್ದವಾದ ಜಲ ಇನ್ನೇಲಿಹುದು ! ನಮಗೆ ಉಳಿಗಾಲ !!
ಸ್ವಚ್ಛವಾದ ನೆಲ ಜಲ ಇದ್ದರೆ ಅದೇ ಸ್ವರ್ಗ ನೋಡು ಇಲ್ಲದಿದ್ದರೆ ಅದೇ ನರಕ ನೋಡು ಎಲ್ಲಿ ತನಕ ನಿನ್ನ ಆರ್ಭಟ ಪರಿಸರದ ಕೂಗು ಇಗಲಾದರೂ ಆಲಿಸು ಓ ಮಾನವ ಓ ಮಾನವ.
ಬಂದಿದೆ ಸಮಯ ಇಗಲಾದರೂ ಬದಲಾಗು
ಪರಿಸರ ಪ್ರಜ್ಞೆಯಲ್ಲಿ ಜಾಗೃತನಾಗು !!
ಜಪಿಸು ಮಂತ್ರವ ನೀ ನೆಲ- ಜಲ ಉಳಿಸಲು ಪ್ರಕೃತಿ ಮಾತೆಯ ಒಡಲಲ್ಲಿ ಒಂದಾಗಿ ಜಾಗೃತನಾಗು!
ಆಗಲಿ ಜಲವನ್ನು ಉಳಿಸುವ ಕಾರ್ಯ ನಿನ್ನ ಮೂಲಕ " ಮಳೆ ನೀರಿನ ಕೊಯ್ಲಿನ " ಮೂಲಕ ಆಗಲಿ ನೆಲವನ್ನು ಉಳಿಸುವ ಕಾರ್ಯ ಪರಿಸರ ಉಳಿಸುವಲ್ಲಿ ಕಾಡನ್ನು ಬೆಳೆಸುವಲ್ಲಿ
ಜೀವಿಗಳಿರುವ ಏಕೈಕ ಗ್ರಹ ಭೂಮಿ ಈ ಮಾತನ್ನು ನೀ ತಿಳಿದು ಬಾಳು.
ಉಳಿಸು ಮೂಕ ಪ್ರಾಣಿಗಳನ್ನು ಉಳಿಸು ಭೂಮಿಯನ್ನು ಪರಿಸರ ಮಾಲಿನ್ಯದಿಂದ,
ಜಾಗತಿಕ ತಾಪಮಾನ ಏರಿಕೆಯಿಂದ ಬದಲಾಗಲಿ ನಿನ್ನ ಜೀವನಶೈಲಿ ಇಗಲೇ ಕೆಡಗಾಲ ಬರಲು ಕಾಯುತ್ತಿದೆ ಇದಕ್ಕೆ ನೀನೇ ಕಾರಣ ತಿಳಿದುಕೋ ಸತ್ಯವ !
ಪ್ರಕೃತಿ ಮಾತೆ ಸಿಟ್ಟಾಗಿಹಳು ಅದಕ್ಕೆ ನೀನೇ ಕಾರಣ ತಿಳಿದುಕೋ ಮಾನವ ಈ ಸತ್ಯವ ಆಗಲಿ ವನಮಹೊತ್ಸವ ಕಾರ್ಯ
ಆಗಲಿ ಹಸಿರು ಪ್ರಕೃತಿ , ಮೂಡಲಿ ಪಕ್ಷಿಗಳ ಚಿಲಿಪಿಲಿ ಗಾನ, ಪ್ರಾಣಿಗಳ ಕೂಗು ಹೊರಡಿಸಲಿ ಇಂಚರ ಮೌನ
ಎಲ್ಲಾ ಕಡೆ ನವ ಉತ್ಸಾಹ ಮೊಳಗಲಿ ನಡೆ ಮೊದಲು ಬದಲಾಗು ಬದಲಾಗು !!
ಬತ್ತಿದೆ ಭೂಮಿ ಒಂದು ಹನಿ ನೀರಿಲ್ಲ ಕಾಣದಾಗಿದೆ ಮೃಗಜಲ ಮರಭೂಮಿಯಾಗಿರುವ ಬರಡು ನೆಲದಲ್ಲಿ
ಹಿಡಿಶಾಪ ಹಾಕಿವೇ ಕಾಡುಪ್ರಾಣಿಗಳು ಈ ಮಾನವರು ಹೀಗೆಕೆ ಹೀಗೆಕೆ ಎಂದು ||
ಮಾಯವಾಗಿದೆ ಶುದ್ಧವಾದ ಗಾಳಿ, ಶುದ್ದವಾದ ಜಲ ಇನ್ನೇಲಿಹುದು ! ನಮಗೆ ಉಳಿಗಾಲ !!
ಸ್ವಚ್ಛವಾದ ನೆಲ ಜಲ ಇದ್ದರೆ ಅದೇ ಸ್ವರ್ಗ ನೋಡು ಇಲ್ಲದಿದ್ದರೆ ಅದೇ ನರಕ ನೋಡು ಎಲ್ಲಿ ತನಕ ನಿನ್ನ ಆರ್ಭಟ ಪರಿಸರದ ಕೂಗು ಇಗಲಾದರೂ ಆಲಿಸು ಓ ಮಾನವ ಓ ಮಾನವ.
ಬಂದಿದೆ ಸಮಯ ಇಗಲಾದರೂ ಬದಲಾಗು
ಪರಿಸರ ಪ್ರಜ್ಞೆಯಲ್ಲಿ ಜಾಗೃತನಾಗು !!
ಜಪಿಸು ಮಂತ್ರವ ನೀ ನೆಲ- ಜಲ ಉಳಿಸಲು ಪ್ರಕೃತಿ ಮಾತೆಯ ಒಡಲಲ್ಲಿ ಒಂದಾಗಿ ಜಾಗೃತನಾಗು!
ಆಗಲಿ ಜಲವನ್ನು ಉಳಿಸುವ ಕಾರ್ಯ ನಿನ್ನ ಮೂಲಕ " ಮಳೆ ನೀರಿನ ಕೊಯ್ಲಿನ " ಮೂಲಕ ಆಗಲಿ ನೆಲವನ್ನು ಉಳಿಸುವ ಕಾರ್ಯ ಪರಿಸರ ಉಳಿಸುವಲ್ಲಿ ಕಾಡನ್ನು ಬೆಳೆಸುವಲ್ಲಿ
ಜೀವಿಗಳಿರುವ ಏಕೈಕ ಗ್ರಹ ಭೂಮಿ ಈ ಮಾತನ್ನು ನೀ ತಿಳಿದು ಬಾಳು.
ಉಳಿಸು ಮೂಕ ಪ್ರಾಣಿಗಳನ್ನು ಉಳಿಸು ಭೂಮಿಯನ್ನು ಪರಿಸರ ಮಾಲಿನ್ಯದಿಂದ,
ಜಾಗತಿಕ ತಾಪಮಾನ ಏರಿಕೆಯಿಂದ ಬದಲಾಗಲಿ ನಿನ್ನ ಜೀವನಶೈಲಿ ಇಗಲೇ ಕೆಡಗಾಲ ಬರಲು ಕಾಯುತ್ತಿದೆ ಇದಕ್ಕೆ ನೀನೇ ಕಾರಣ ತಿಳಿದುಕೋ ಸತ್ಯವ !
ಪ್ರಕೃತಿ ಮಾತೆ ಸಿಟ್ಟಾಗಿಹಳು ಅದಕ್ಕೆ ನೀನೇ ಕಾರಣ ತಿಳಿದುಕೋ ಮಾನವ ಈ ಸತ್ಯವ ಆಗಲಿ ವನಮಹೊತ್ಸವ ಕಾರ್ಯ
ಆಗಲಿ ಹಸಿರು ಪ್ರಕೃತಿ , ಮೂಡಲಿ ಪಕ್ಷಿಗಳ ಚಿಲಿಪಿಲಿ ಗಾನ, ಪ್ರಾಣಿಗಳ ಕೂಗು ಹೊರಡಿಸಲಿ ಇಂಚರ ಮೌನ
ಎಲ್ಲಾ ಕಡೆ ನವ ಉತ್ಸಾಹ ಮೊಳಗಲಿ ನಡೆ ಮೊದಲು ಬದಲಾಗು ಬದಲಾಗು !!
ಇಂದ :- ಶ್ರೀ ರಾಜೇಶ.ಎನ್.ನಾಗೂರೆ ಸ.ಶಿ ಸ.ಪ್ರೌ.ಶಾಲೆ ಕಲಗುರ್ತಿ ತಾ|| ಚಿತ್ತಾಪೂರ ಜಿ|| ಕಲಬುರಗಿ
No comments:
Post a Comment